ಶಿವಶರಣೆ ಅಕ್ಕಮಹಾದೇವಿ 11ನೇ ಶತಮಾನದಲ್ಲಿ ಸಮಾಜದ ಉದ್ದಾರಕ್ಕಾಗಿ ತಮ್ಮ ವಚನಗಳ ಮೂಲಕ ಜನರ ಗಮನ ಸೆಳೆದವರು, ಇವರ ಅಂಕಿತನಾಮ ಚೆನ್ನಮಲ್ಲಿಕಾರ್ಜುನ, ಸಮಾಜದ ಉದ್ದಾರಕ್ಕಾಗಿ ಬಹಳಷ್ಟು ಊರುಗಳನ್ನು ಸುತ್ತಿ akkamahadevi vachanagalu kannada ದಲ್ಲಿ ಹೇಳಿ ಜನರ ಗಮನ ಸೆಳೆದಿದ್ದರು.
Akkamahadevi Vachanagalu Kannada
ನಮಗೆ ನಮ್ಮ ಲಿಂಗದ ಚಿಂತೆ,
ನಮಗೆ ನಮ್ಮ ಭಕ್ತರ ಚಿಂತೆ
ನಮಗೆ ನಮ್ಮ ಆದ್ಯತೆ ಚಿಂತೆ
ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ
ಲೋಕದ ಮಾತು ನಮಗೇಕಣ್ಣಾ ?
ಅಕ್ಕ ಕೆಳಾ ,ನಾನೊಂದು ಕನಸ ಕಂಡೆ
ಅಕ್ಕಿ,ಅಡಕೆ,ಓಲೆ, ತೆಂಗಿನಕಾಯ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ ಮನೆಗೆ ಬಂದುದ ಕಂಡೆನವ್ವಾ
ಮಿಕ್ಕು ಮೀರಿ ಹೋಹನ ಬೆಂಬೆತ್ತಿ ಕೈವಿಡಿವೆನು
ಚನ್ನಮಲ್ಲಿಕಾರ್ಜುನ ಕಂಡು ಕಣ್ ತೆರೆದನು
ತನುಕರಗದವರಲ್ಲಿ ಮಜ್ಜಿನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗಳಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಜ್ಞಾನ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಅರಿವು ಕಣ್ಣೀರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು .
ಪರಿಣಾಮಿಗಳಲ್ಲದವರಲ್ಲಿ ಇರಲೊಲ್ಲೆಯಯ್ಯಾ
ಹೃದಯ ಕಮಲ ಶುದ್ಧವಿಲ್ಲದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನಲ್ಲಿ ಏನುಂಟೆಂದು ಎನ್ನ ಕರಸ್ಥಲವನಿಳಿಗೊಂಡೇ
ಹೇಳಾ ಚೆನ್ನಮಲ್ಲಿಕಾರ್ಜುನ ,
ನಾಳೆ ಬರುವುದು
ನಮಗಿಂದೇ ಬರಲಿ
ಇಂದು ಬರುವುದು
ನಮಗೀಗಲೇ ಬರಲಿ !
ಆಗೀಗಲೆನ್ನದಿರು
ಚೆನ್ನಮಲ್ಲಿಕಾರ್ಜುನ.
ಲೋಕದ ಚೇಷ್ಟೆಗೆ ರವಿ ಬಿಜವಾದಂತೆ
ಕರಣಂಗಳ ಚೇಷ್ಟೆಗೆ ಮನವೇ ಬೀಜ
ಎನಗುಳ್ಳುದೊಂದು ಮನ ಆ ಮನ ನಿಮ್ಮಲ್ಲಿ ಒಡವೆರೆದೆ ಬಳಿಕ
ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನ.
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ?
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ
ರೂಪಿದ್ದು ಫಲವೇನು ಬಾಣವಿಲ್ಲದನ್ನಕ್ಕ
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ
ಚನ್ನಮಲ್ಲಿಕಾರ್ಜುನ
ಅಕ್ಕಮಹಾದೇವಿಯವರ ವಚನಗಳು ಈ ಕೆಳಕಂಡಂತಿವೆ
ಕನ್ನಡದ ಮೊದಲ ಕವಿಯತ್ರಿ ಅಕ್ಕಮಹಾದೇವಿ ಎಂದೇ ಹೇಳಬಹುದು ಇವರು ತಮ್ಮ ವಚನಗಳ ಮುಖಾಂತರ ಬಹಳಷ್ಟು ಜನರನ್ನ ಪರಿವರ್ತಿಸಿದ್ದಾರೆ ನ್ಯಾಯ ಮಾರ್ಗದಲ್ಲಿ ಜನರು ನಡೆದುಕೊಂಡರೆ ದೇವರು ನಿಮ್ಮನ್ನು ಕಾಪಾಡುತ್ತಾನೆ ಎಂಬ ಅಂಶವನ್ನ ಜನರಿಗೆ ತಮ್ಮ ವಚನಗಳ ಮುಖಾಂತರ ಅಕ್ಕಮಹಾದೇವಿಯವರು ತಿಳಿಸಿದ್ದಾರೆ. ಕನ್ನಡದ ಮೊದಲ ವಚನಗಾರ್ತಿ ಮಹಿಳೆ ಎಂದೆ ಹೆಸರುವಾಸಿಯಾಗಿರುವ ಅಕ್ಕಮಹಾದೇವಿಯವರು ತುಂಬಾ ಚಿಕ್ಕ ವಯಸ್ಸಿನಲ್ಲೇ ಎಲ್ಲಾ ಆಸೆಗಳನ್ನು ತೊರೆದು ಶಿವನೇ ನನ್ನ ಪತಿ ಎಂದು ತೀರ್ಮಾನಿಸಿ ಪ್ರಪಂಚದ ಉದ್ಧಾರಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿ ಇಟ್ಟ ವೀರ ಮಹಿಳೆ ಅಕ್ಕಮಹಾದೇವಿಯವರು.
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗ೦ಜಿದಡೆಂತಿಯ್ಯಾ ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯಾ
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ ?
ಚೆನ್ನಮಲ್ಲಿಕಾರ್ಜುನದೇವಾ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ ಸುತ್ತಿನಿಂದೆಗಳುಬಂದಡೇ
ಮನದಲ್ಲಿ ಕೋಪವ
ತಾಳದೆ ಸಮಾಧಾನಿಯಾಗಿರಬೇಕು.
ಅರಿದೆನೆಂದಡೆ ಅರಿಯಬಾರದು ನೋಡಾ
ಘನಕ್ಕೆ ಘನ ತಾನೇ ನೋಡಾ
ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ
ಸೋತೆನು
ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯಾ
ಕ್ಷಮೆ ದಯೆ ಶಾಂತಿ ಸೈರಣೆಯಿರಲು
ಸಮಾಧಿಯ ಹಂಗೇಕಯ್ಯಾ
ಲೋಕವೇ ತಾನಾದ ಬಳಿಕ ಏಕಾಂತದ
ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನ.
ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ
ಕಡೆಯಲಿದ್ದಾಡುವ ಹದ್ದು ಬಲ್ಲುದೇ ಅಯ್ಯಾ?
ನದಿಯ ಗುಂಪ ತಾವರೆ ಬಲ್ಲುದಲ್ಲದೆ
ಕಡೆಯಲಿದ್ದ ಹೊನ್ನಾವರಿಕೆ ಬಲ್ಲುದೇ ಅಯ್ಯಾ ?
ಪುಷ್ಪದ ಪರಿಮಳವ ತುಂಬಿಬಲ್ಲುದಲ್ಲದೆ
ಕಡೆಯಲಿದ್ದಾಡುವ ನೊರಜು ಬಲ್ಲುದೇ ಅಯ್ಯಾ?
ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣರ ನಿಲವ
ನೀವೇ ಬಲ್ಲಿರಲ್ಲದೆ, ಈ ಕೋಣನ ಮೈಮೇಲಣಸೊಳೆಗಳೆತ್ತ
ಬಲ್ಲವಯ್ಯಾ?
ಎನ್ನ ಕಾಯ ಮಣ್ಣು, ಜೀವ ಬಯಲು
ಯಾವುದು ಹಿಡಿವೆನಯ್ಯ ದೇವಾ ?
ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯಾ ?
ಎನ್ನ ಮಾಯಾವನು ಮಣಿಸಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ.
ಅಕ್ಕಮಹಾದೇವಿ ವಚನಗಳು
ಪುರುಷನ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ
ಕಾಡುವುದು
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡುವುದು ಕಾಡುವುದು
ಲೋಕವೆಂಬ ಮಾಯೆಗೆ
ಶರಣಾಚಾರಿತ್ರ್ಯ ಮರುಳಾಗಿ
ತೋರುವುದು
ಚೆನ್ನಮಲ್ಲಿಕಾರ್ಜುನನೊಲಿದ
ಶರಣಂಗೆ ಮಾಯೆಯಿಲ್ಲಾ
ಮರಹಿಲ್ಲ ಅಭಿಮಾನವು ಇಲ್ಲ.
ಎನ್ನ ಮನವ ಮಾರುಗೊಂಡನವ್ವಾ
ಎನ್ನ ತನುವ ಸೂರೆಗೊಂಡನವ್ವಾ
ಎನ್ನ ಸುಖವನೊಪ್ಪು ಗೊಂಡನವ್ವಾ
ಎನ್ನ ಇರವನಿಂಬುಗೊಂಡನವ್ವಾ ಚೆನ್ನಮಲ್ಲಿಕಾರ್ಜುನ
ಒಲುಮೆಯವಳಾನು.
ಚಂದನದ ಕಡಿದು ಕೊರೆದು ತೇದೊಡೆ
ನೊಂದೆನೆಂದು ಕಂಪ ಬಿಟ್ಟಿತ್ತೇ ?
ತಂದು ಸುವರ್ಣದ ಕಡಿದೊರೆದೊಡೆ
ಬೆಂದು ಕಳಂಕ ಹಿಡಿದಿತ್ತೆ ?
ಸಂದು ಸಂದನು ಕಡಿದು ಕಬ್ಬನು
ತಂದು ಗುಣದಲ್ಲಿಕ್ಕೆರಿದಡೆ
ಬೆಂದು ಪಾಕಗೊಳೆ ಸಕ್ಕರೆಯಾಗಿ
ನೊಂದನೆಂದು ಸವಿಯ ಬಿಟ್ಟಿತ್ತೇ
ನ ಹಿಂದೆ ಮಡಿದ ಹಿನಂಗಳೆಲ್ಲದ ತಂದು
ಮುಂದಿಳುಹಲು ನಿಮಗೆ ಹಾನಿ ಎನ್ನತಂದೆ
ಚೆನ್ನಮಲ್ಲಿಕಾರ್ಜುನ ದೇವಯ್ಯ
ಕೊಂದೊಡೆ ಶರಣೆಂಬುದು ಮಾಣೆ .
ಹಸಿವಾದರೆ ಊರೊಳಗೆ
ಭಿಕ್ಷಾನ್ನನ್ಗಲುಂಟು
ತೃಷೆಯಾದರೆ ಕೆರೆ ಬಾವಿ
ಹಲಂಗಳು೦ಟು
ಶಯನಕ್ಕೆ ಹಾಲು ದೇಗುಲವುಂಟು
ಚೆನ್ನಮಲ್ಲಿಕಾರ್ಜುನಯ್ಯಾ
ಆತ್ಮಸಂಗಾತಕ್ಕೆ ನೀನೆನಗುಂಟು.
ಬಿಟ್ಟೆನೆಂದರೂ ಬಿಡದಿ ಮಾಯೆ !
ಬಿಡದಿದ್ದರೆ ಬೆಂಬೆತ್ತಿತ್ತು ಮಾಯೆ !
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ !
ಸವಣಂಗೆ ಸವಾಣಿಯಾಯಿತ್ತು ಮಾಯೆ !
ಯತಿಯೆ ಪರಾಕಿಯಾಯಿತ್ತು ಮಾಯೆ !
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನಮಲ್ಲಿಕಾರ್ಜುನದೇವ ನಿಮ್ಮಾಣೆ.
Akkamahadevi Vachanagalu in Kannada with Meaning
ಇತ್ತೀಚಿನ ಮಕ್ಕಳಿಗೆ ಅಕ್ಕಮಹಾದೇವಿಯವರ ವಚನಗಳ ಬಗ್ಗೆ ತಿಳಿದಿರುವುದಿಲ್ಲ ಇದಕ್ಕೆ ಮುಖ್ಯ ಕಾರಣ ಶಾಲಾ-ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಲ್ಲಿ ಇವರ ಬಗ್ಗೆ ಮಾಹಿತಿಯನ್ನ ನೀಡಿಲ್ಲ ಜೊತೆಗೆ ಮನೆಯಲ್ಲೂ ಸಹ ನಮ್ಮ ಭವ್ಯ ಪರಂಪರೆ ಬಗ್ಗೆ ಯಾರೂ ಸಹ ಮಾತಾಡುತ್ತಿಲ್ಲ ಈ ಕಾರಣಕ್ಕಾಗಿ ಅಕ್ಕಮಹಾದೇವಿಯವರ ವಚನಗಳು ಇಂದಿನ ಕಾಲದಲ್ಲಿ ಪ್ರಚಲಿತವಾಗಿಲ್ಲ ಹಾಗಾಗಿ ಬಿಡುವಿನ ವೇಳೆಯಲ್ಲಿ akkamahadevi vachanagalu in kannada with meaning ಪುಸ್ತಕಗಳನ್ನ ನಿಮ್ಮ ಮಕ್ಕಳಿಗೆ ಓದಲು ನೀಡಿ ಜೊತೆಗೆ ಹೇಗೆ ಓದಿ ತಿಳಿದುಕೊಳ್ಳಬೇಕು ಎಂಬ ಮಾಹಿತಿಯನ್ನು ನಿಮ್ಮ ಮಕ್ಕಳಿಗೆ ನೀಡಿದರೆ ತುಂಬಾ ಉಪಯೋಗಕ್ಕೆ ಬರುತ್ತದೆ ಆದಷ್ಟು ಅಕ್ಕಮಹಾದೇವಿಯವರ ವಚನಗಳನ್ನು ನಾವು ಇಲ್ಲಿ ನೀಡಿದ್ದೇವೆ ಅವುಗಳನ್ನ ಸರಿಯಾದ ಕ್ರಮದಲ್ಲಿ ಅಭ್ಯಾಸ ಮಾಡಿ ತಿಳಿದುಕೊಳ್ಳಿ.
ಎಲ್ಲ ಎಲ್ಲವನರಿದು ಫಲವೇನಯ್ಯಾ
ತನ್ನ ತಾನರಿಯಬೇಕಲ್ಲದೆ?
ತನ್ನಲ್ಲಿ ಅರಿವು ಸ್ವಯವಾಗಿರಲು
ಅನ್ಯರ ಕೇಳಲುಂಟೆ ?
ಚೆನ್ನಮಲ್ಲಿಕಾರ್ಜುನ
ನೀನರಿವಾಗಿ ಮುಂದುದೋರಿದ
ಕಾರಣ ನಿಮ್ಮಿಂದ
ನಿಮ್ಮನರಿದೆನಯ್ಯಾ ಪ್ರಭುವೆ.
ಸಂಸಾರವೆಂಬ ಹಗೆಯಯ್ಯಾ
ತಂದೆ
ಎನ್ನ ವಂಶವಂಶ ತಪ್ಪದೆ ಅರಸಿಕೊಂಡು
ಬರುತ್ತಿದೆಯಯ್ಯಾ
ಎನ್ನುವನರಸಿಯರಸಿ ಹಿಡಿದು
ಕೊಳ್ಳುತ್ತಿದೆಯಯ್ಯಾ
ನಿಮ್ಮ ಮರಮೊಕ್ಕೆ ಕಾಯಯ್ಯಾ
ಎನ್ನ ಬಿನ್ನಪವನವಧಾರು
ಚೆನ್ನಮಲ್ಲಿಕಾರ್ಜುನ.
ಪೃತ್ವಿಯ ಗೆಲಿದ ಏಲೇಶ್ವರರ್ನ ನಾನು
ಕಂಡೆ
ಭವಭ್ರಮೆಯ ಗೆಲದ ಬ್ರಹ್ಮಶ್ವರನ
ನಾನು ಕಂಡೆ
ಸತ್ವ ರಾಜ ತಮ ತಾವಿದವ ಗೆಲಿದ
ತ್ರಿಪುರಾಂತಕನ ಕಂಡೆ
ಅಂತರಜ್ಞ ಆತ್ಮಘ್ಯನದಿಂದ
ಜ್ಯೋತಿಸಿದ್ದಯ್ಯನ ನಾನು ಕಂಡೆ ಇವರೆಲ್ಲರ ಮಾಧ್ಯಮ ಸ್ಥಾನ
ಪ್ರಸಾದ ಬಿದ್ದ
ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯಾ.
Akkamahadevi Vachanagalu in Kannada
ಪಚ್ಚೆಯ ನೆಲಗಟ್ಟು ಕಣಕದ ತೋರಣ
ವಜ್ರದ ಕಮ್ಬ
ಪವಳದ ಚಪ್ಪರವಿಕ್ಕಿ ಮದುವೆದು
ಮಾಡಿದರು
ನಮ್ಮವರೆನ್ನ ಮದುವೆಯ ಮಾಡಿದರು
ಕಂಕಣ ಕೈದರ ಗಟ್ಟಿ ಸ್ಥಿರ ಸೇಸೆಯನಿಟ್ಟು
ಚೆನ್ನಮಲ್ಲಿಕಾರ್ಜುನನೆಂಬ
ಗಂಡಂಗೆನ್ನ ಮದುವೆಯ ಮಾಡಿದರು.
ಎನ್ನಂತೆ ಪುಣ್ಯನಗೆಯ್ದವರುಂಟೆ
ಎನ್ನಂತೆ ಭಾಗ್ಯಾಂಗೇಯ್ದವರುಂಟೆ
ಕಿನ್ನರನಂತಪ್ಪ
ಸೋದರನೆನಗೆ !
ಏಳೇಳು ಜನ್ಮದಲ್ಲಿ
ಶಿವಭಕ್ತರೆ ಬಂಧುಬಳಗೆನಗೆ
ಚನ್ನಮಲ್ಲಿಕಾರ್ಜುನನಂತಪ್ಪ
ಗಣದ ನೋಡಾ ಎನಗ .
ನಮಗೆ ನಮ್ಮ
ಲಿಂಗದ ಚಿಂತೆ
ನಮಗೆ ನಿಮ್ಮ
ಭಕ್ತರ ಚಿಂತೆ
ನಮಗೆ ನಮ್ಮ
ಚೆನ್ನಮಲ್ಲಿಕಾರ್ಜುನನಯ್ಯನ
ಚಿಂತೆಯಲ್ಲದೆ
ಲೋಕದ ಮಾತು ನಮಗೇತಕಣ್ಣ.
ಹಾಲು ತುಪ್ಪವ
ನುಂಗಿ ಬೇರಾಗಬಲ್ಲುದೆ
ಸೂರ್ಯಕಾಂತಿಯಲ್ಲಿದ್ದಗ್ನಿಯ
ನಾರುಬಲ್ಲರು
ಅಪಾರ ಮಹಿಮೆ
ಚೆನ್ನಮಲ್ಲಿಕಾರ್ಜುನ
ನಿನ್ನೆನ್ನೋಳಗಿರ್ದ ಪರಿಯ ಬೇರಿಲ್ಲದೆ
ಕಂಡು ಕಣ್ತೆರೆದೆನು.
ಕಾಯಕ್ಕೆ ನೆರಳಾಗಿ ಕಾಡಿತ್ತು ಮಾಯೆ!
ಪ್ರಾಣಕ್ಕೆ ಮೌನವಾಗಿ ಕಾಡಿತ್ತು ಮಾಯೆ!
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ!
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ!
ಜಗದ ಜಂಗುಳಿ೦ಗೆ ವೆಂಗೊಳನೆತ್ತಿ ಕಾಡಿತ್ತು ಮಾಯೆ!
ಚೆನ್ನಮಲ್ಲಿಕಾರ್ಜುನ
ನೀನೊಡ್ಡಿದ ಮಾಯೆಯನ್ನಾದರೂ ಗೆಲಬಾರದು.
Akkamahadevi Vachanagalu in Kannada
ಅಕ್ಕ ಕೆಳಕ್ಕಾ ನಾನೊಂದು
ಕನಸ ಕಂಡೆ
ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ
ಗೊರವನು
ಬಂದೆನ್ನ ನೆರೆದ ನೋಡವ್ವಾ
ಆತನನಪ್ಪಿಕೊಂಡು ತಳವೆಳಗಾದೆನು
ಚೆನ್ನಮಲ್ಲಿಕಾರ್ಜುನನ ಕಂಡು
ಕಣ್ಣ ಮುಚ್ಚಿ ತೆರೆದು ತಳವಳಗಾದೆನು.
ಶಿವನೇ ಉಳಿವ ಕರೆವ
ನೇಹಮಂಟೆ
ಸಂಸಾರಕ್ಕಂ ನಿಮ್ಮಲ್ಲಿ
ಗೆಡೆಯಾಡುವ
ಭಕ್ತಿಯುಂಟೆ ?
ಏನಯ್ಯಾ ಶಿವನೇ
ಏನೆಂದು ಪೇಳ್ವೆ ಲಜ್ಜೆಯ
ಮಾತಾ ಚೆನ್ನಮಲ್ಲಿಕಾರ್ಜುನ.
ಆಸನದಿಂದ ಕುದಿದು ,
ವೈಸನದಿಂದ ಬೆಂದು
ಅತಿ ಆಸೆಯಿಂದ ಬಳಲಿ
ವಿಷಯಕ್ಕೆ ಹರಿವ ಜೀವಿಗಳು
ನಿಮ್ಮನರಿಯರು
ಕಾಲಕಲ್ಪಿತ ಪ್ರಳಯ ಜೀವಿಗಳೆಲ್ಲ ನಿಮ್ಮನೆತ್ತ ಬಲ್ಲರಯ್ಯ
ಚೆನ್ನಮಲ್ಲಿಕಾರ್ಜುನ.
ಅಳೀಸಂಕುಲವೇ
ಮಾಮರವೇ ,ಬೆಳದಿಂಗಳೇ
ಕೋಗಿಲೆಯ
ನಿಮ್ಮನೆಲ್ಲರನ್ನು
ಒಂದ ಬೇಡುವೆನು
ಎನ್ನೊಡೆಯ
ಚನ್ನಮಲ್ಲಿಕಾರ್ಜುನದೇವ
ಕಂಡೆಡೆ ಕರೆದು ತೋರಿರೆ.
ಅಕ್ಕಮಹಾದೇವಿ ವಚನಗಳ ಸಂಗ್ರಹ
ಅಯ್ಯ ಪಾತಾಳವಿತ್ತಿತ್ತು
ಶ್ರೀಪಾದವೆತ್ತೆತ್ತ
ಬ್ರಹ್ಮಾ೦ಡವಿತ್ತೆತ್ತೆ ಮಣಿಮುಕುಟವಿತ್ತೆತ್ತ
ಅಯ್ಯ ದಶ ದಿಕ್ಕು ಇತ್ತಿತ್ತೇ
ದಶಭುಜಗಳತ್ತತ್ತ
ಚೆನ್ನಮಲ್ಲಿಕಾರ್ಜುನಯ್ಯ
ನೀವೆನ್ನ ಕರಸ್ಥಲಕ್ಕೆ ಬಂದು
ಚುಳುಕಾದಿರಯ್ಯಾ.
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಎಂಬತ್ತು ನಾಲ್ಕು ಲಕ್ಷ ಯೋನಿಯೊಳಗೆ
ಬಂದೆ ಬಂದೆ ಬಾರದ
ಭವಗಳ ನುಂಡೆ ನುಂಡೆ
ಸುಖಾಸುಖಂಗಳ
ಹಿಂದಣ ಜನ್ಮ೦ಗಳು ತಾನೇನಾದರಾಗಲಿ
ಇಂದು ನೀ ಕರುಣಿಸು
ಚೆನ್ನಮಲ್ಲಿಕಾರ್ಜುನ.
ಭವಭವದಲಿ ತೊಳಲಿ ಬಳಲಿತ್ತೆನ್ನ ಮನ
ಆನೇವೆನಯ್ಯ
ಹುಕಿದೊಂದೊಡೆ ಉಂಟು ಹಸಿವಾಯಿತ್ತು
ಇಂದು ನೀನೊಲಿದೆಯಾಗಿ
ಎನಗೆ ಅಮೃತದ ಅಪಾಯವಾಯಿತ್ತು
ಇದು ಕಾರಣ ನೀನಿಕ್ಕಿದ ಮಾಯೆಯ ನಿಮ್ಮ
ಮೆಟ್ಟಿದೆನಾದೊಡೆ
ಆನೆ ನಿಮ್ಮಾಣೆ ಚನ್ನಮಲ್ಲಿಕಾರ್ಜುನ.
ಕಾಮಬಲ್ಲದನೆಂದರೆ
ಉರುಹಿ ಭಸ್ಮವ ಮಡಿದ
ಕಾಲ ಬಲ್ಲದನೆಂದರೆ ಕೆಡಹಿ ತುಳಿದ !
ಬ್ರಹ್ಮ ಬಲ್ಲದೆನೆಂದರೆ
ಶಿರವ ಚಿವುಟಿಯಾಡಿದ !
ಎಲೆ ಅವ್ವ , ನೀನು ಕೇಳಾ ತಾಯ
ವಿಷ್ಣು ಬಲ್ಲದನೆಂದರೆ
ಮುರಿದು ಕಂಕಾಳವ ಪಿಡಿದ !
ತ್ರಿಪುರದ ಕೋಟೆ ಬಲ್ಲಿತ್ತೆಂದರೆ
ನೊಸಲ ಕಣ್ಣಿಂದುರುಹಿದೆನವ್ವ
ಇದು ಕಾರಣ
ಚನ್ನಮಲ್ಲಿಕಾರ್ಜುನ ಗಂಡನೆನಗೆ!
ಜನನ ಮರಣಕ್ಕೊಳಗಾಗದವನ
ಬಲುಹನೇನ ಬಣ್ಣಿಪೆನವ್ವ .
ಆಯುಷ್ಯ ಹೋಗುತ್ತಿದೆ ,ಭವಿಷ್ಯ ತೊಲಗುತ್ತಿದೆ
ಕುಡಿರ್ದ ಸತಿಸುತರು , ತಮತಮಗೆ ಹರಿದು
ಹೋಗುತ್ತಿದ್ದರೆ ಬೇಡ ಬೇಡವೇಲೇ
ಬಂಜೆಯಾಗಿ ಕೆಡಬೇಡ ಬಯಲಿಂಗೆ ಮನವೇ
ಚೆನ್ನಮಲ್ಲಿಕಾರ್ಜುನನ ಶರಣರ
ಸಂಗದಲ್ಲಿ ಹೊಣೆ ಹೊಕ್ಕು
ಬದುಕು ಕಂಡಾ ಮನವೇ.
Akkamahadevi Vachanagalu in Kannada with Meaning
ತಮ್ಮ ಮನೆ ತೊರೆದು ಊರುಗಳನ್ನ ಸುತ್ತಿ ಜನರಿಗೆ ತಮ್ಮ ವಚನಗಳ ಮುಖಾಂತರ ಬೋಧನೆ ಮಾಡುತ್ತಿದ್ದರು ಇವರ ಬೋಧನೆ ತಿಳಿದು ಹಲವು ಜನರು ಪರಿವರ್ತನೆಗೊಂಡಿದ್ದಾರೆ ಬಿಜಾಪುರದಲ್ಲಿ ಜನಿಸಿದ ಅಕ್ಕಮಹಾದೇವಿಯವರು ಹಲವು ಊರುಗಳನ್ನ ಸುತ್ತಿ ತಮ್ಮ ವಚನಗಳ ಮುಖಾಂತರ ನಮ್ಮ ಕನ್ನಡ ನಾಡಿಗೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ.
ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು
ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ
ಬಚ್ಚಬರಿಯ ಭವಿಗಳ ಸಂಗದಲ್ಲಿದ್ದರೆ
ಕಿಚ್ಚಿನೊಳಗೆ ಬಿದ್ದ ಕಿಡೆಯಂತಪ್ಪುದಯ್ಯ
ಸುಚಿತ್ತದಿಂದ ನಿಮ್ಮ ಸದ್ಭಕ್ತರ
ಸಂಗದಲ್ಲಿರಿಸದಿರ್ದಡೆ ನಾನಿನ್ನೆತ್ತ
ಸಾರುವೆನು ಹೇಳ ಚೆನ್ನಮಲ್ಲಿಕಾರ್ಜುನ ?
ಎನಗೇಕಯ್ಯ ನಾ ಪ್ರಪಂಚಿತ ಪುತ್ಥಳಿ
ಮಾಯಿಕದ ಮಲಭಾಂಡ ಆತುರದ ಭವನಿಳಯ
ಜಲಕುಂಭದ ಜಡೆಯಲ್ಲಿ , ಒಸರುವ ನೆಲೆವನೆಗೇಕಯ್ಯಾ ?
ಬೆರಳು ತಾಳೆಹಣ್ಣ ಹಿಸುಕಿದೆಡೆ ಮೇಲಲುಂಟೆ
ಬಿತ್ತೆಲ್ಲಾ ಜೀವ ಅದರೊಪ್ಪದ ತೇರ ಎನಗೆ
ಎನ್ನ ತಪ್ಪನೊಪ್ಪಗೊಳ್ಳಿ ಚೆನ್ನಮಲ್ಲಿಕಾರ್ಜುನ
ದೇವರ ದೇವಾ ನೈನ್ ಅಣ್ಣಗಳಿರಾ.