Naleya bhavishya : ನಾಳೆಯ ಭವಿಷ್ಯ ಹೇಗಿದೆ ಎಂಬುವ ಕುತೂಹಲ ನಿಮ್ಮಲ್ಲಿದ್ದರೆ ಖಂಡಿತ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ ಅಕಸ್ಮಾತ್ ನಿಮ್ಮ ಜಾತಕದಲ್ಲಿ ಏನಾದರೂ ದೋಷಗಳು ಕಂಡುಬಂದಲ್ಲಿ ಅದಕ್ಕೆ ಪರಿಹಾರವನ್ನು ಸಹ ನಾವು ಇಲ್ಲಿ ನೀಡಿದ್ದೇವೆ ಹಾಗಾಗಿ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಕೆಲವರು ಜಾತಕದಲ್ಲಿ ದೋಷ ಇದ್ದರೂ ಸಹ ಅದನ್ನು ಪರಿಹಾರ ಪಡೆಯದೆ ಹಾಗೆ ಬಿಡುತ್ತಾರೆ ಹೀಗಾಗಿ ಹಲವು ತೊಂದರೆಗಳಿಗೆ ಅವರು ಸಿಲುಕಿ ತುಂಬಾ ಕಷ್ಟ ಪಡಬೇಕಾಗುತ್ತದೆ ಹಾಗಾಗಿ ನಾವು ನೀಡಿರುವ ಪರಿಹಾರವನ್ನು ಸರಿಯಾಗಿ ತಿಳಿದುಕೊಂಡು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಯಾವುದೇ ಕಷ್ಟ ನೋವುಗಳಿದ್ದರೂ ಸಂಪೂರ್ಣವಾಗಿ ಪರಿಹಾರವಾಗುತ್ತೆ.
ಇಂದಿನ ಮೇಷ ರಾಶಿ ದಿನ ಭವಿಷ್ಯ
ಈ ರಾಶಿಯವರಿಗೆ ಈ ದಿನ ತುಂಬಾ ಅದೃಷ್ಟ ಏಕೆಂದರೆ ನಕ್ಷತ್ರಗಳು ನಿಮಗೆ ಶುಭವನ್ನುಂಟು ಮಾಡುತ್ತವೆ. ಸರಿಯಾಗಿ ಸಮಯವನ್ನು ಉಪಯೋಗಿಸಿಕೊಳ್ಳಿ ನಿಂತಿರುವ ಎಲ್ಲಾ ಕೆಲಸಗಳು ನೆರವೇರುತ್ತದೆ ಕುಟುಂಬದವರು ಸಹ ನಿಮಗೆ ನೆರವಾಗುತ್ತಾರೆ. ನೀವು ಹಣಕಾಸಿನಲ್ಲಿ ತುಂಬಾ ಮುಂದುವರೆಯುತ್ತೀರಾ ಇದನ್ನು ಕಂಡು ಹಲವು ಜನರು ಅಸೂಯೆ ಗೊಳ್ಳುತ್ತಾರೆ ಹಾಗೂ ನಿಮಗೆ ತೊಂದರೆಯನ್ನು ಕೊಡಲು ಪ್ರಯತ್ನ ಪಡಬಹುದು ಹಾಗಾಗಿ ತುಂಬಾ ಎಚ್ಚರದಂದಿರಿ. naleya bhavishya in kannada ಕೆಲವು ಬಂದು ಬಾಂಧವರು ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಹೇಳುತ್ತಾರೆ ಅದನ್ನ ನೀವು ಹೆಚ್ಚಿಗೆ ಯೋಚನೆ ಮಾಡದೆ ತರಾತುರಿಯಲ್ಲಿ ಕೆಲಸವನ್ನ ಮಾಡಲು ಪ್ರಯತ್ನ ಪಡಬೇಡಿ ಯಾವುದೇ ಕೆಲಸ ಪ್ರಾರಂಭಿಸಬೇಕಾದರೂ ನಿಧಾನವಾಗಿ ಯೋಚಿಸಿ ಗುರು ಹಿರಿಯರ ಸಲಹೆ ಪಡೆದು ಮುಂದುವರೆಯಿರಿ. ನಿಮ್ಮ ಹೆಂಡತಿಯಿಂದ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ ಇನ್ನು ಈ ರಾಶಿಯ ಮಕ್ಕಳು ವಿದ್ಯಾಭ್ಯಾಸದಲ್ಲಿ ತುಂಬಾ ಮುಂದುವರೆಯುತ್ತಾರೆ ಮನೆಯವರಿಂದ ಪ್ರೋತ್ಸಾಹ ಸಹ ಸಿಗುತ್ತೆ ಹೆಚ್ಚಿನ ಹಣ ಕೂಡ ನಿಮಗೆ ಸಿಗುವುದರಿಂದ ಓಡಾಟದಲ್ಲಿ ನೀವು ಮೈ ಮರೆಯುತ್ತೀರಿ ಹಾಗಾಗಿ ಓದಿನ ಕಡೆ ಹೆಚ್ಚು ಗಮನ ಹರಿಸಿ ಬೆಳಿಗ್ಗೆ ಲಕ್ಷ್ಮಿಯನ್ನು ಮನಸ್ಸಿನಲ್ಲಿ ನೆನೆದು ನಿಮ್ಮ ಕೆಲಸ ಕಾರ್ಯಗಳನ್ನು ಮುಂದುವರಿಸಿ ಎಲ್ಲಾ ಒಳ್ಳೆಯದಾಗುತ್ತೆ.
ಇಂದಿನ ವೃಷಭ ರಾಶಿ ದಿನ ಭವಿಷ್ಯ Naleya Bhavishya
ತಂದೆ ತಾಯಿಯರ ಅನುಭವಗಳನ್ನ ಕೇಳಿ ನಿಮಗೆ ಜೀವನದಲ್ಲಿ ತುಂಬಾ ನೆರವಿಗೆ ಬರುತ್ತೆ ಹೆಚ್ಚಿನ ನಕಾರಾತ್ಮಕ ಯೋಜನೆಗಳು ನಿಮ್ಮ ಬಳಿ ಇರುತ್ತೆ ಹಾಗಾಗಿ ಬೆಳಿಗ್ಗೆ ಧ್ಯಾನ ದೇವರ ಪೂಜೆ ಮಾಡಿ ಕೆಲಸ ಕಾರ್ಯಗಳನ್ನು ಮುಂದುವರಿಸಿ ಮನಸ್ಸಿಗೆ ಶಾಂತಿ ಸಹ ದೊರೆಯುತ್ತೆ. ಮಾನಸಿಕವಾಗಿ ತುಂಬಾ ಕುಗ್ಗುತ್ತೀರಾ ಬಂಧು ಬಳಗದವರು ನಿಮ್ಮ ಮೇಲೆ ನಕಾರಾತ್ಮಕವಾಗಿ ಯೋಚನೆ ಮಾಡುವಂತೆ ಪ್ರಭಾವ ಬೀರುತ್ತಾರೆ ಹಾಗಾಗಿ ಮನಸ್ಶಾಂತಿ ನಿಮ್ಮದಾಗುವುದಿಲ್ಲ ಈ ಕಾರಣದಿಂದಾಗಿ ಏಕಾಂತದಲ್ಲಿ ಧ್ಯಾನ ಯೋಗಾಸನ ಮಾಡಿ ಯಾವುದೇ ಹೊಸ ಕೆಲಸಗಳನ್ನು ಪ್ರಾರಂಭಿಸಬೇಡಿ ಏಕೆಂದರೆ ನಕ್ಷತ್ರಗಳು ನಿಮ್ಮ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ ಹಾಗಾಗಿ ಹಲವು ಕೆಲಸ ಕಾರ್ಯಗಳು ಸ್ಥಗಿತಗೊಳ್ಳುತ್ತವೆ ಈಗಾಗಲೇ ಮಾಡುತ್ತಿರುವ ಕೆಲಸವನ್ನು ತುಂಬಾ ಶ್ರದ್ಧೆಯಿಂದ ಮುಂದುವರಿಸಿ ಕುಟುಂಬದವರ ಮೇಲೆ ಹೆಚ್ಚಿನ ನಿಗಾ ಇಡೀ ದೈನಂದಿನ ಆದಾಯ ನಿಮಗೆ ಕುಂಠಿತಗೊಳ್ಳಲಿದೆ ಹಾಗಾಗಿ ಖರ್ಚು ವೆಚ್ಚವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ ಈ ವಾರ ಕಳೆದ ಮೇಲೆ ಮುಂದಿನ ವಾರ ನಿಮಗೆ ತುಂಬಾ ಒಳ್ಳೆಯ ದಿನಗಳಾಗಿರುತ್ತವೆ ಹಾಗಾಗಿ ಸ್ವಲ್ಪ ಸಮಾಧಾನವಾಗಿ ವರ್ತಿಸಿ.
ಇಂದಿನ ಮಿಥುನ ರಾಶಿ ಭವಿಷ್ಯ
ಆಧ್ಯಾತ್ಮಿಕ, ದೇವಸ್ಥಾನ, ಮಠ ಮಂದಿರಗಳ ಬಗ್ಗೆ ನಿಮಗೆ ವಿಶೇಷ ಒಲವು ಬರುತ್ತದೆ ಹಾಗಾಗಿ ಧಾರ್ಮಿಕ ಕಾರ್ಯಗಳನ್ನು ಹೆಚ್ಚಾಗಿ ನೀವು ಈ ವಾರ ಮಾಡುತ್ತೀರಾ ಮನೆಯವರ ಜೊತೆ ಉತ್ತಮ ಬಾಂಧವ್ಯ ನಿಮ್ಮದಾಗಿರುತ್ತದೆ ಮಕ್ಕಳನ್ನು ಹೆಚ್ಚು ಪೋಷಣೆ ನೀವು ಮಾಡಬಹುದು ಶಾಂತಿ ನೆಮ್ಮದಿ ತಾಳ್ಮೆ ನಿಮ್ಮದಾಗಿರುತ್ತೆ ಹಾಗಾಗಿ ನೀವು ಕೈಗೊಂಡ ಎಲ್ಲಾ ಕೆಲಸಗಳು ನೆರವೇರುತ್ತೆ ಮಕ್ಕಳ ಮೇಲೆ ಹೆಚ್ಚು ನಿಯಂತ್ರಣವನ್ನ ತರಬೇಡಿ ಈ ರೀತಿ ಮಾಡಿದರೆ ಮಕ್ಕಳು ಹಠಮಾರಿಗಳಾಗುತ್ತಾರೆ ನಿಮ್ಮ ಮಾತನ್ನು ಕೇಳೋದಿಲ್ಲ ಅವರಿಗೆ ಇಷ್ಟ ಬಂದ ಕೆಲಸವನ್ನು ಮಾಡಲು ಪ್ರೋತ್ಸಾಹ ನೀಡಿ ನಿಮ್ಮ ಮಾರ್ಗದರ್ಶನ ಖಂಡಿತ ಅವರಿಗೆ ಇರುತ್ತೆ ಹಾಗಾಗಿ ಮಕ್ಕಳು ತಪ್ಪು ಮಾಡಿದರೆ ಮಾತ್ರ ಅವರಿಗೆ ಮಾರ್ಗದರ್ಶನ ನೀಡಿ ಇಲ್ಲವಾದರೆ ಅವರು ಮಾಡುವ ಎಲ್ಲಾ ಕೆಲಸಗಳಿಗೂ ಬೆಂಬಲ ನೀಡಿದರೆ ಖಂಡಿತ ಅವರು ಮುಂದೆ ನಿಮಗೆ ಒಳ್ಳೆಯ ಹೆಸರನ್ನು ತಂದು ಕೊಡುತ್ತಾರೆ.
ಇಂದಿನ ಕಟಕ ರಾಶಿ ಭವಿಷ್ಯ
ನಿಮಗೆ ಈ ವಾರ ಶನಿ ಮೂರನೇ ಎಲ್ಲಿರುವುದರಿಂದ ಹೆಚ್ಚಿನ ಸಂತೋಷದ ದಿನಗಳು ನಿಮ್ಮದಾಗಿರುವುದಿಲ್ಲ ಮಾಡಿದ ಕೆಲಸಗಳೆಲ್ಲ ಅರ್ಧಕ್ಕೆ ನಿಂತು ಹೋಗುತ್ತವೆ ನಿಮ್ಮ ಬಂಧು ಬಾಂಧವರು ಸಹ ನಿಮ್ಮ ಮೇಲೆ ಅಪವಾದ ವಹಿಸಲು ಪ್ರಯತ್ನ ಪಡುತ್ತಾರೆ ಹೀಗಾಗಿ ಹೊಸ ಕೆಲಸಗಳು ನೀವು ಎಷ್ಟೇ ಕಷ್ಟಪಟ್ಟು ಮಾಡಿದರು ನೆರವೇರುವುದಿಲ್ಲ. naleya bhavishya ಹಾಗಾಗಿ ಆದಷ್ಟು ನೀವು ಈ ಹಿಂದೆ ನಿಲ್ಲಿಸಿರುವ ಕೆಲಸಗಳನ್ನ ಮುಂದುವರಿಸಿಕೊಂಡು ಹೋಗಿ. ಹೆಚ್ಚು ಸೋಲುಗಳು ನಿಮ್ಮದಾಗುವುದರಿಂದ ಧಾರ್ಮಿಕ ಕೆಲಸಗಳು ಪೂಜೆ ಇಂತಹ ಧನಾತ್ಮಕ ಪ್ರಯತ್ನವನ್ನ ನೀವು ನಡೆಸುತ್ತೀರಾ ಇದು ತುಂಬಾ ಒಳ್ಳೆಯದು ಕೋಪ ಆತುರ ನಿಮ್ಮನ್ನ ಹೆಚ್ಚು ಸಮಸ್ಯೆಗಳಿಗೆ ದೂಡುತ್ತದೆ ನಿಮ್ಮ ಮನೆಯಲ್ಲಿ ವಾತಾವರಣ ಚೆನ್ನಾಗಿ ಇರೋದಿಲ್ಲ ಹಾಗಾಗಿ ಸಂಯಮದಿಂದ ಎಲ್ಲಾ ಕೆಲಸಗಳನ್ನ ಮಾಡುವುದು ಅವಶ್ಯ. ನಿಮ್ಮ ಮನೆಯಲ್ಲಿರುವ ಪೋಷಕರ ಸಲಹೆ ಪಡೆದು ಸಂಯಮದಿಂದ ಎಲ್ಲಾ ಕೆಲಸಗಳನ್ನು ಮುಂದುವರಿಸಿ ಈ ವಾರ ಕಳೆದ ನಂತರ ಮುಂದಿನ ವಾರ ತುಂಬಾ ಒಳ್ಳೆಯ ಸುದ್ದಿಯನ್ನು ನೀವು ಪಡೆಯಲಿದ್ದೀರಿ.
ಇಂದಿನ ಸಿಂಹ ರಾಶಿ ಭವಿಷ್ಯ
ಹೆಚ್ಚು ಅನುಭವ ಉಳ್ಳವರ ಸಂಬಂಧವನ್ನು ನೀವು ಮಾಡುತ್ತೀರಾ ಸಕಾರಾತ್ಮಕವಾಗಿ ಎಲ್ಲಾ ಕೆಲಸಗಳು ಮುಂದುವರಿತವೆ ಸಂತೋಷವನ್ನು ನೀವು ಅನುಭವಿಸಲಿದ್ದೀರಾ, ಕುಟುಂಬದ ವಾತಾವರಣ ಖಂಡಿತ ತುಂಬಾ ಬದಲಾಗಿ ಸಕಾರಾತ್ಮಕ ಆಲೋಚನೆಯನ್ನ ನಿಮ್ಮಲ್ಲಿ ತರುತ್ತದೆ ಹೆಚ್ಚು ಕೆಲಸ ನಿಮ್ಮದಾಗುವುದರಿಂದ ತುಂಬಾ ಒತ್ತಡವನ್ನ ಅನುಭವಿಸಬೇಕಾಗುತ್ತದೆ ಹಾಗಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ಪಡೆಯಬೇಕಾದರೆ ಧ್ಯಾನ ಹಾಗೂ ದೇವರ ಪೂಜೆಯನ್ನ ಮಾಡಿ ಖಂಡಿತ ನೀವು ಕೈಗೊಂಡ ಎಲ್ಲಾ ಕೆಲಸಗಳು ನೆರವೇರುತ್ತವೆ ಸಾಕಷ್ಟು ಹಣ ಕೂಡ ನಿಮ್ಮದಾಗಲಿದೆ ಹಾಗಾಗಿ ವಿದೇಶ ಪ್ರವಾಸ ಸಹ ನೀವು ಮಾಡುವ ಅವಶ್ಯಕತೆ ಬರುತ್ತದೆ ನೀವು ಈಗಾಗಲೇ ಕಳೆದುಕೊಂಡಿರುವ ಕೆಲವು ಕೆಲಸಗಳು ಮರಳಿ ನಿಮ್ಮ ಬಳಿ ಬರುತ್ತವೆ.
ಇಂದಿನ ಕನ್ಯಾ ರಾಶಿ ಭವಿಷ್ಯ
Naleya bhavishya, ನಿಮ್ಮ ತಂದೆ ತಾಯಿಗಳಿಂದ ತುಂಬಾ ಹಸ್ತಕ್ಷೇಪ ಉಂಟಾಗುತ್ತೆ ಕೆಲಸದ ಒತ್ತಡ ಸಹ ಹೆಚ್ಚಾಗಿರುವುದರಿಂದ ತುಂಬಾ ಗೊಂದಲದ ಮನಸ್ಥಿತಿ ನಿಮ್ಮನ್ನ ಕಾಡುತ್ತದೆ ಸಹೋದರರು ಸಹ ನಿಮ್ಮ ನೆರವಿಗೆ ಬರೋದಿಲ್ಲ ತುಂಬಾ ವಾಗ್ವಾದಗಳು ಉಂಟಾಗುತ್ತವೆ ಶಾಂತಿ ವಾತಾವರಣ ನಿಮ್ಮದಾಗುವುದಿಲ್ಲ ಹಾಗಾಗಿ ನೀವು ಮಾಡುತ್ತಿರುವ ಕೆಲಸಗಳು ನೆರವೇರದೆ ಮುಂದೆ ಹೋಗುತ್ತವೆ ಹಣಕಾಸ್ತಿನ ತೊಂದರೆಗಳು ನಿಮ್ಮನ್ನು ಕಾಡಲಿವೆ ಹಾಗಾಗಿ ನಿಮಗೆ ಬರಬೇಕಾಗಿರುವ ಹಣ ನಿಮ್ಮ ಕೈ ಸೇರದೆ ಆರ್ಥಿಕ ಸಂಕಷ್ಟ ಸಹ ನಿಮ್ಮನ್ನ ಕಾಡಲಿವೆ ಹಾಗಾಗಿ ಪ್ರತಿದಿನ ಧ್ಯಾನ ಪೂಜೆ ಮಾಡಿ ದೇವರು ತುಂಬಾ ಒಳ್ಳೆಯದನ್ನು ಮಾಡಲಿದ್ದಾನೆ ಈ naleya bhavishya ಕಳೆದ ಮೇಲೆ ಅದೃಷ್ಟ ಖಂಡಿತ ನಿಮ್ಮ ಬಳಿ ಬರುತ್ತೆ ಸೂರ್ಯ ನಾಲ್ಕನೇ ಸ್ಥಾನಕ್ಕೆ ಹೋಗುವುದರಿಂದ ನೀವು ಮಾಡುತ್ತಿರುವ ಕೆಲಸಗಳಲ್ಲಿ ಪ್ರಮೋಷನ್ ಸಕ್ಸಸ್ ಸಹ ನಿಮ್ಮದಾಗಲಿದೆ.
ಇಂದಿನ ತುಲಾ ರಾಶಿ ಭವಿಷ್ಯ
ಇವರ ನಿಮ್ಮ ಮನಸ್ಸಿಗೆ ಇಷ್ಟವಾಗುವಂತಹ ಚಟುವಟಿಕೆಗಳು ನಡೆಯುತ್ತವೆ ನಿಮ್ಮ ಕೆಲಸಗಳಲ್ಲಿ ಸ್ವಲ್ಪ ಕಠಿಣತೆಗಳು ಎದುರಾದರು ನಿಮ್ಮ ಬಂಧು ಬಾಂಧವರಿಂದ ನೆರವು ಸಿಗುತ್ತದೆ ನಿಮ್ಮ ಮೇಲೆ ನಂಬಿಕೆ ಸದಾ ಇಡಿ ನೀವು ಕಲಿತಿರುವ ಕೌಶಲ್ಯದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದರೆ ತುಂಬಾ ಒಳ್ಳೆಯದಾಗುತ್ತೆ. ಯಾರೆಲ್ಲಾ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಅವರಿಗೆ ಒಳ್ಳೆಯ ಖುಷಿ ವಿಷಯಗಳು ಸಿಗುತ್ತೆ ಓದಿನ ಮೇಲೆ ನಿಗಾ ಇಡಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಒಳ್ಳೆಯ ಫಲಿತಾಂಶ ನಿಮಗೆ ಸಿಗಲಿದೆ ಹೆಚ್ಚಿನ ಸ್ನೇಹಿತರು ನಿಮಗಿರುವುದರಿಂದ ಆಗಿಂದಾಗೆ ತುಂಬಾ ಪ್ರವಾಸ ಮಾಡುವ ಆಸೆ ನಿಮಗೆ ಉಂಟಾಗುತ್ತೆ ಎಕ್ಸಾಮ್ ಗಳು ಹತ್ತಿರ ಬರುತ್ತಿವೆ ಹಾಗಾಗಿ ಶ್ರದ್ಧೆಯಿಂದ ಪ್ರತಿದಿನ ಶಾಲೆಯಲ್ಲಿ ಕಲಿತ ವಿಷಯಗಳನ್ನ ಮನೆಗೆ ಮರಳಿದ ಮೇಲೆ ಚೆನ್ನಾಗಿ ಓದಿ ಶ್ರದ್ದೆಯಿಂದ ಖಂಡಿತ ಈ ವರ್ಷ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತೆ.
ಇಂದಿನ ವೃಶ್ಚಿಕ ರಾಶಿ ಭವಿಷ್ಯ
ಹೆಚ್ಚಿನ ಸಮಯವನ್ನು ಕುಟುಂಬದೊಂದಿಗೆ ನೀವು ಕಳೆಯಲಿದ್ದೀರಿ, ಮನೋರಂಜನೆ ಹೆಚ್ಚಾಗಿ ಸಿಗುವುದರಿಂದ ಮನಸ್ಸು ತುಂಬಾ ಶಾಂತತೆಯಿಂದ ಕೂಡಿರುತ್ತೆ ದೈನಂದಿನ ಕೆಲಸಗಳು ತುಂಬಾ ನಿರಾಶಾಯವಾಗಿ ನಡೆದು ಹೋಗುತ್ತೆ ನಿಮ್ಮೊಳಗೆ ಈ ವಾರ ತುಂಬಾ ಉತ್ಸಾಹ ಶಕ್ತಿ ಅನುಭವಿಸಿ ಕೆಲಸಗಳೆಲ್ಲ ತುಂಬಾ ಚೆನ್ನಾಗಿ ನಡೆಯುತ್ತೆ ನಿಮ್ಮ ಮನೆಯಲ್ಲಿ ಸಂತೋಷ ಶಾಂತಿ ವಾತಾವರಣ ಖಂಡಿತ ಮೂಡಿ ಬರುತ್ತೆ ಹೊಸ ಕೆಲಸವನ್ನ ನೀವು ಪ್ರಾರಂಭಿಸಲಿದ್ದೀರಿ ಹಾಗಾಗಿ ಹೆಚ್ಚಿನ ಗಮನವನ್ನು ಮನೆಯವರ ಮೇಲೆ ನೀಡಬೇಕಾಗುತ್ತದೆ ಕಾರಣ ಹೆಚ್ಚಾಗಿ ನೀವು ಹೊರಗಡೆ ಕೆಲಸವನ್ನು ಮಾಡುತ್ತಿರುವುದರಿಂದ ಕುಟುಂಬದ ಮೇಲೆ ಸ್ವಲ್ಪ ನಿಗಾ ಕಡಿಮೆಯಾಗುತ್ತೆ ಆರೋಗ್ಯದ ಮೇಲೆ ಎಚ್ಚರ ಇರಲಿ.
ಇಂದಿನ ಧನು ರಾಶಿ ಭವಿಷ್ಯ
ಸಕಾರಾತ್ಮಕ ಮನೋಭಾವನೆಯನ್ನು ನೀವು ಹೊಂದಿರುವುದರಿಂದ ಎಲ್ಲಾ ಕೆಲಸಗಳು ಸುಲಭವಾಗಿ ನೆರವೇರುತ್ತೆ ಬಹಳ ಸಮಯದ ಹಿಂದೆ ಪ್ರಾರಂಭಿಸಿದ್ದ ಕೆಲಸಗಳು ಸಹ ಸುಖಾಂತ್ಯ ಕಾಣಲಿವೇ ಬಹಳ ದಿನಗಳಿಂದ ಸಿಗಬೇಕಾಗಿದ್ದ ಹಣ ಕೂಡ ನಿಮ್ಮ ಗೆಳೆಯರಿಂದ ನಿಮ್ಮ ಬಳಿ ಬರುತ್ತೆ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ನಿಮ್ಮ ಪ್ರತಿದಿನದ ಕಾರ್ಯಗಳನ್ನ ಮುಂದುವರಿಸಿ. Naleya bhavishya ಮಕ್ಕಳಿಗೆ ಹೆಚ್ಚು ಸ್ನೇಹಿತರನ್ನು ಕಾಣುವ ಭಾಗ್ಯ ಸಿಗುತ್ತೆ ಹಾಗಾಗಿ ಓದಿನ ಮೇಲೆ ಸ್ವಲ್ಪ ಗಮನ ಕಡಿಮೆಯಾಗುತ್ತೆ ಶ್ರದ್ಧೆಯಿಂದ ಪ್ರತಿದಿನ ಅಭ್ಯಾಸ ನಡೆಸಿದರೆ ಖಂಡಿತ ನೀವು ಮಾಡಬೇಕು ಅಂದುಕೊಂಡಿರುವ ಕೆಲಸಗಳೆಲ್ಲ ನೆರವೇರಿ ಉದ್ಯಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತೆ.
ಇಂದಿನ ಮಕರ ರಾಶಿ ಭವಿಷ್ಯ
ತುಂಬಾ ತಾಳ್ಮೆಯ ಜೀವನ ನಿಮ್ಮದಾಗಿರುವುದರಿಂದ ಸಮಸ್ಯೆಗಳನ್ನು ಬಹಳ ಸುಲಭವಾಗಿ ಜಯಗಳಿಸುತ್ತೀರಾ ಆರ್ಥಿಕವಾಗಿ ಕೂಡ ನೀವು ಸದೃಢ ಗೊಳ್ಳಲಿದ್ದೀರಿ, ಸ್ನೇಹಿತರಿಂದ ನಿಮ್ಮ ಎಲ್ಲಾ ಕೆಲಸಗಳಿಗೆ ನೆರವು ಸಿಗಲಿದೆ ತಂದೆ ತಾಯಿಯ ಆಶೀರ್ವಾದ ಸಹ ನಿಮ್ಮ ಬಳಿ ಇರುವುದರಿಂದ ಆರ್ಥಿಕವಾಗಿ ತುಂಬಾ ಬಲಗೊಳ್ಳುತ್ತೀರ ವಿದೇಶ ಪ್ರವಾಸ ಮಾಡಬೇಕು ಎಂದುಕೊಂಡರು ಬಹಳ ಕೆಲಸ ನಿಮ್ಮ ಬಳಿ ಇರುವುದರಿಂದ ಅದು ಸಾಧ್ಯ ಆಗೋದಿಲ್ಲ ಶುಭಕಾರ್ಯಗಳಿಗೆ ನಿಮ್ಮ ನೆರವು ಹಲವು ಜನಕ್ಕೆ ಸಿಗುತ್ತೆ ಯಾರೆಲ್ಲಾ ಮದುವೆಯಾಗಬೇಕು ಎಂದು ಹುಡುಕಾಟ ನಡೆಸುತ್ತಿದ್ದಾರೆ ಅವರಿಗೆ ಶುಭ ಶುದ್ದಿ ಸಹ ದೊರಕಲಿದೆ ಮನೆಯಲ್ಲಿ ತುಂಬಾ ಜವಾಬ್ದಾರಿ ಇರುವುದರಿಂದ ಹೊರಗಡೆ ಹೆಚ್ಚು ಸ್ನೇಹಿತರೊಂದಿಗೆ ಬೆರೆಯಲು ಆಗುವುದಿಲ್ಲ.
ಇಂದಿನ ಕುಂಭ ರಾಶಿ ಭವಿಷ್ಯ
ಹೆಚ್ಚು ನಿಮ್ಮ ಕುಟುಂಬದೊಂದಿಗೆ ಸಮಯವನ್ನು ವಿನಯೋಗಿಸಲಿದ್ದೀರಿ ಕೆಲಸ ತುಂಬಾ ಕಟ್ಟುನಿಟ್ಟಿನಿಂದ ನೀವು ಮಾಡುತ್ತಾ ಬಂದಿರುವುದರಿಂದ ಹೊಸ ಯೋಜನೆಗಳು ನಿಮ್ಮ ಕೈ ಸೇರುತ್ತೆ ಇಂತಹ ಸಂದರ್ಭದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ನೆರವಿಗೆ ಬರೋದಿಲ್ಲ ಸ್ನೇಹಿತರ ನೆರವು ಖಂಡಿತ ನಿಮಗೆ ಸಿಗಲಿದೆ ತಂದೆ ತಾಯಿಯ ಆಶೀರ್ವಾದ ನಿಮ್ಮ ಬಳಿ ಇರುವುದರಿಂದ ತುಂಬಾ ತಾಳ್ಮೆಯಿಂದ ಕೆಲಸವನ್ನು ಮಾಡಿ ಕೋಪದಲ್ಲಿ ಕೆಲಸವನ್ನು ಮಾಡಲು ಪ್ರಯತ್ನ ಪಟ್ಟರೆ ಖಂಡಿತ ವಿಫಲವಾಗುತ್ತೆ. ಒಳ್ಳೆಯ ಮನುಸ್ತೈರ್ಯ ನಿಮ್ಮದಾಗಿರುವುದರಿಂದ ಖಂಡಿತ ನೀವು ಕೈಗೊಂಡ ಎಲ್ಲಾ ಕೆಲಸಗಳು ನೆರವೇರುತ್ತೆ ಸೂರ್ಯ ನಿಮ್ಮ ನಕ್ಷತ್ರದಲ್ಲಿ ಮೂರನೇ ಸ್ಥಾನದಲ್ಲಿದ್ದಾನೆ ಹಾಗಾಗಿ ಕೆಟ್ಟದ್ದನ್ನು ಆಗೋದು ತಡೆದು ಕೇವಲ ಒಳ್ಳೆಯ ಕೆಲಸಗಳನ್ನು ನಿಮ್ಮ ಕೈಯಿಂದ ಮಾಡಿಸಲಿದ್ದಾನೆ.
ಇಂದಿನ ಮೀನ ರಾಶಿ ಭವಿಷ್ಯ
ಹೊಸ ಹೊಸ ಮನೆಯನ್ನು ನೀವು ಕಟ್ಟಲು ಪ್ರಾರಂಭಿಸುತ್ತೀರಾ ಶಾಂತಿ ನೆಮ್ಮದಿ ಖಂಡಿತ ಒಂದು ದಿನ ನಿಮ್ಮ ಬಳಿ ಬರಲಿದೆ ಹೆಚ್ಚು ಕೆಲಸಗಳು ನಿಮ್ಮ ಕೈ ಸೇರುವುದರಿಂದ ಸಮಯದ ಅಭಾವ ಆಗುತ್ತೆ ಹಾಗಾಗಿ ಕಟ್ಟುನಿಟ್ಟಿನ ಜೀವನವನ್ನು ಬೆಳೆಸಿಕೊಳ್ಳಿ ಸಂಬಂಧಿಕರು ಸಹ ನಿಮಗೆ ನೆರವಾಗಲಿದ್ದಾರೆ. ಹೆಚ್ಚು ಜನರು ನಿಮ್ಮ ಬಳಿ ಹಣ ಕೇಳಲು ಮುಂದಾಗುತ್ತಾರೆ ಹಾಗಾಗಿ ಕೊಟ್ಟು ತೊಂದರೆಗೆ ಈಡಾಗೋದಕ್ಕಿಂತ ಮುಂಚೆ ಇದರಿಂದ ತಪ್ಪಿಸಿಕೊಳ್ಳಿ ಪ್ರತಿದಿನ ಮಹಾಲಕ್ಷ್ಮಿಯ ಧ್ಯಾನ ಮಾಡಿ ಎಲ್ಲವೂ ಖಂಡಿತ ಒಳ್ಳೆಯದಾಗುತ್ತೆ.
ಎಲ್ಲರೂ naleya bhavishya or ನಮ್ಮ nale dina bhavishya ಹೇಗಿರುತ್ತೆ ಯಾವ ಒಳ್ಳೆಯ ಸುದ್ದಿ ನಮ್ಮನ್ನು ಸೇರುತ್ತೆ ಕೆಟ್ಟದು ಏನಾಗುತ್ತೆ ಎಂಬುದನ್ನು ಪ್ರತಿದಿನ ಪ್ರತಿಯೊಬ್ಬರು ಯೋಚನೆ ಮಾಡುತ್ತಾ ಜೀವನ ಪ್ರಾರಂಭಿಸುತ್ತಾರೆ. ಇದನ್ನೆಲ್ಲಾ ಪಕ್ಕಕ್ಕಿಟ್ಟು ಒಳ್ಳೆಯ ಮನಸ್ಸಿನೊಂದಿಗೆ ಗುರುಹಿರಿಯರ ಆಶೀರ್ವಾದ ಪಡೆದು ಕೆಲಸವನ್ನು ನೀವು ಪ್ರಾರಂಭಿಸಿದರೆ ಖಂಡಿತ ಎಲ್ಲ ಒಳ್ಳೆಯದಾಗುತ್ತೆ, ಕೆಲವರಿಗೆ ಪ್ರತಿ ದಿನ ಭವಿಷ್ಯವನ್ನ ತಿಳಿದುಕೊಳ್ಳಲು ಆಗುವುದಿಲ್ಲ ಇಂಥವರಿಗೆ ನಾವು ಹೇಳುವ ಒಂದೇ ಸಂದೇಶ ಒಳ್ಳೆಯ ಮನಸ್ಥಿತಿಯನ್ನು ಇಟ್ಟುಕೊಳ್ಳಲು ಧ್ಯಾನ ಮಾಡಿ ಆರೋಗ್ಯದ ಮೇಲೆ ನಿಗಾ ಖಂಡಿತ ಪ್ರತಿಯೊಬ್ಬರೂ ಇಟ್ಟುಕೊಳ್ಳಬೇಕು ಹಾಗಾಗಿ ಯೋಗಾಸನ ಮಾಡಿದರೆ ಉತ್ತಮ. ಪ್ರತಿದಿನ ಉತ್ತಮ ಆಹಾರ ಸೇವಿಸುವುದರಿಂದ ಆರೋಗ್ಯದ ಸಮಸ್ಯೆ ನಿಮ್ಮನ್ನ ಖಂಡಿತ ಕಾಡುವುದಿಲ್ಲ ಪ್ರತಿದಿನ ದೇವರ ಪೂಜೆ ಮಾಡಿ ಗಾಯತ್ರಿ ಮಂತ್ರ ಪಠಣೆ ಮಾಡಿದರೆ ಖಂಡಿತ ಒಳ್ಳೆಯದಾಗುತ್ತೆ.