16ನೇ ಶತಮಾನದಲ್ಲಿ ಪ್ರಸಿದ್ಧ ಸರ್ವಜ್ಞ ತ್ರಿಪದಿಗಳು ರಚಿಸಿ ಹೆಸರುವಾಸಿಯಾಗಿದ್ದ ಕವಿ, ಪದ್ಯಗಳನ್ನ ಬರೆದು ಅವುಗಳ ಮುಖಾಂತರ ಸಮಾಜದ ಪರಿವರ್ತನೆ ಮಾಡಬೇಕೆಂಬ ಉದ್ದೇಶದಿಂದ ಸರ್ವಜ್ಞ ತ್ರಿಪದಿಗಳು ರಚಿಸಿದ್ದಾರೆ.
100 ಸರ್ವಜ್ಞ ತ್ರಿಪದಿಗಳು Sarvajnana Vachanagalu
ವಿದ್ಯೆ ಕಲಿಸದ ತಂದೆ । ಬುದ್ದಿ ಹೇಳದ ಗುರು ।
ಬಿದ್ದಿರಲು ಬಂದು ನೋಡದ ತಾಯಿಯು ।
ಶುದ್ಧ ವೈರಿಗಳು ಸರ್ವಜ್ಞ ।
ಮಾತೆಯಿಂ ಹಿತರಿಲ್ಲ, ಕೋತಿಯಂ ಮರುಳಿಲ್ಲ
ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ
ಜಾತನಿಂದಿಲ್ಲ ಸರ್ವಜ್ಞ.
ಸತ್ಯಕ್ಕೆ ಸರಿಯಿಲ್ಲ, ಚಿತ್ತಕ್ಕೆ ಸ್ಥಿರವಿಲ್ಲ
ಹಸ್ತದಿಂದಧಿಕ ಹಿತರಿಲ್ಲ ಪರದೈವ
ನಿಂತ್ರನಿಂದಿಲ್ಲ ಸರ್ವಜ್ಞ.
ನಾಲಿಗೆಗೆ ನುಣಿಪಿಲ್ಲ ಹಾಲಿಗಿಂ ಬಿಳುಪಿಲ್ಲ
ಕಾಲದಿಂದದಧಿಕ ಅರಿವಿಲ್ಲ ದೈವವುಂ
ಶೂಲಿಯಿಂದಿಲ್ಲ ಸರ್ವಜ್ಞ.
ಅಂಬಳೂರೊಳಗೆಸೆವ , ಕುಂಬಾರಸಾಲೆಯಲಿ
ಇಂಬಿನ [ಕಳೆಯ ] ಮಳಿಯೊಳು -ಬಸವರಾಸ
ನಿಂಬಿಟ್ಟನೆನ್ನ ಸರ್ವಜ್ಞ.
ಹೆತ್ತವಳು ಮಾಳಿ ಎನ್ನ, ನೊತ್ತಿ ತೆಗೆದವಳು ಕೇಶಿ
ಕತ್ತು ಬೆನ್ನ ಹಿಡಿದವಳು ಕಾಳಿ -ಮೊಯಿದಿಲ್ಲೆನ್ನ
ಬತ್ತಲಿರಿಸಿದಳು ಸರ್ವಜ್ಞ.
ಹೊಲೆಯಿಲ್ಲ ಅರಿದಂಗೆ, ಬಲವಿಲ್ಲ ಬಡವಂಗೆ
ತೊಲೆ ಕಂಬವಿಲ್ಲ , ಗಗನಕ್ಕೆ ಯೋಗಿಗೆ ಕುಲವೆಂಬುದಿಲ್ಲ
ಸರ್ವಜ್ಞ.
ಕಾಡೆಲ್ಲಾ ಕಸುಗಾಯಿ , ನಾವೆಲ್ಲ ಹೆಗ್ಗಿಡವು
ಆಡಿದ ಮಾತು ನಿಜವಿಲ್ಲ ಮಲೆನಾಡು ಕಾಡು
ಸಾಕೆಂದ ಸರ್ವಜ್ಞ.
ನಿಮಗೆ ತಿಳಿಸುವ ಉದ್ದೇಶದಿಂದ ಸರ್ವಜ್ಞನ ಹಲವು ಪ್ರಸಿದ್ಧ sarvajnana vachanagalu & ತ್ರಿಪದಿಗಳನ್ನ ನೀಡಿದ್ದೇವೆ ಚುಟುಕ ಪದ್ಯಗಳನ್ನ ಓದಿ ತಿಳಿಯುವುದು ಬಹಳಷ್ಟು ಇದೆ ತಮ್ಮ ಸಂದೇಶವನ್ನ ಚುಟುಕು ತ್ರಿಪದಿಗಳ ಮೂಲಕ ಸರ್ವಜ್ಞ ಕವಿಯು ಜನರಿಗೆ ಸಂದೇಶವನ್ನು ನೀಡುತ್ತಿದ್ದನು, ಕರ್ನಾಟಕದ ಮಹಾನ್ ಕವಿಗಳಲ್ಲಿ ಸರ್ವಜ್ಞನ ಒಬ್ಬನಾಗಿದ್ದರೂ ನಮ್ಮ ಶಾಲಾ ಪುಸ್ತಕದಲ್ಲಿ ಸರ್ವಜ್ಞನ ಹಲವು ತ್ರಿಪದಿಗಳನ್ನ ನಾವೆಲ್ಲ ಓದಿದ್ದೇವೆ ತುಂಬಾ ಚುಟಿಕಾಗಿದ್ದರು ಅದರಲ್ಲಿರುವ ಅರ್ಥ ದೊಡ್ಡದು. ತುಂಬಾ ಉದ್ದದ ಕವಿತೆಗಳನ್ನ ಬರೆದರೆ ಜನರು ಅರ್ಥ ಮಾಡಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ ಹಾಗೂ ಕೆಲವರು ಉದ್ದ ಕವಿತೆಯನ್ನು ಓದಲು ಹೋಗೋದಿಲ್ಲ ಈ ಕಾರಣಕ್ಕಾಗಿಯೇ ಸರ್ವಜ್ಞನು ತಾನು ಹೇಳುವ ಸಂದೇಶ ಚಿಕ್ಕದಾಗಿರಬೇಕು ಎಂಬ ಉದ್ದೇಶದಿಂದ ಕೇವಲ ಮೂರು ಸಾಲುಗಳ ಕವಿತೆಯನ್ನು ಬರೆಯುತ್ತಿದ್ದರು.
ಸರ್ವಜ್ಞ ತ್ರಿಪದಿಗಳು pdf download
ಹಮ್ಮು ಎಂಬುದು ಕಿಚ್ಚು ಒಮ್ಮೆಲೇ
ನಂದುವುದೇ ? ಬೊಮ್ಮು ಹರಿ ಬೆಂದು
ಜಗಬೆಂದು ದಾಕಿಚ್ಚ ಗಮ್ಮಿಹನೆ ಯೋಗಿ ಸರ್ವಜ್ಞ.
ಹಸಿವ ಕೊಂದಾತಂಗೆ , ಪಶುವಧೆಯ
ಮಾಡದವಗೆ ಹುಸಿ ಕರ್ಮ
ಕಾಮವಳಿಂದಾಗೇ ಇಹಪರಿದಿ ಶಶಿಧರನೊಲಿವ ಸರ್ವಜ್ಞ.
ಸರ್ವಜ್ಞನೆಂಬುವನು ಗರ್ವದಿಂದಾದವನೆ
ಸರ್ವರೊಳೊಂದೊಂದು ನುಡಿಗಲಿತು
ವಿದ್ಯೆಯ ಪರ್ವತವೇ ಆದ ಸರ್ವಜ್ಞ.
ಸಾಲವನು ಕೊಂಬಾಗ ಹಾಲೊಗರುಂಡಂತೆ
ಸಾಲಿಗರು ಕೊಂಡು ಎಳೆವಾಗ
ಕಿಬ್ಬದಿಯ ಕೀಳು ಮುರಿದಂತೆ ಸರ್ವಜ್ಞ.
ಒಳಗಣ ಜ್ಯೋತಿಯ ಬೆಳಗ ಬಲ್ಲಾತಂಗೆ
ಬೆಳಗಾಯಿತೇಳಿ ಕೇಳಿ ಎಂತೆಂಬ ನುಡಿಯ
ಕಳವಳವೇಕೆ ಸರ್ವಜ್ಞ.
ಒಂದೊಂದು ಹನಿ ಬಿದ್ದು ನಿಂದಲ್ಲಿ ಮಡುವಕ್ಕೆ
ಸಂದ ಜ್ಞಾನಿಗಳ ಒಡನಾಡೆ ಪರಬೊಮ್ಮ
ಮುಂದೆ ಬಂದಕ್ಕೂ ಸರ್ವಜ್ಞ.
ತನ್ನ ತನ್ನತಾನರಿದವನ ಮುನ್ನ ಹೊದ್ದದ್ದು ಮಾಯೆ
ಉನ್ನತ ಮಪ್ಪ ಗಜವೇರಿ ಒಪ್ಪವನು
ಕುನ್ನಿಗಂಜುವನೆ ಸರ್ವಜ್ಞ.
ಭಕ್ತಿ ಎಂಬುದು ಬೀಜ ಮುಕ್ತಿ ಎಂಬುದೇ ಫಲವು
ಯುಕ್ತಿಯು೦ ವೃಕ್ಷ ವೇರಿದಗೆ ಇಹದಲ್ಲಿ
ಮುಕ್ತಿ ಇಹುದೆಂದ ಸರ್ವಜ್ಞ.
ದಾನಭಕ್ತಿಗಳಲ್ಲಿ ನಾನು ಮರೆದಿರಬೇಕು
ನಾನೆಂಬ ರೋಗ ನೀಗಿದಾಗೆ, ಗುರುಬೋಡೆ
ತಾನೇ ಫಲಿಸುವದು ಸರ್ವಜ್ಞ.
ಕಂಡುದನು ಆಡೇ ಭೂ । ಮಂಡಲವು ಮುನಿಯುವುದು
ಕೊಂಡಾಡುತಿಚ್ಛೇ ನುಡಿದಿಹರೆ , ಜಗವೆಲ್ಲ ।
ಮುಂಡಾಡುತಿಹುದು ಸರ್ವಜ್ಞ.
ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು
ಎತ್ತು ಗಾಣುವನು ಹೊತ್ತು ತಾ
ನಿತ್ಯದಲಿ ಸುತ್ತಿಬಂದಂತೆ ಸರ್ವಜ್ಞ.
ಊರಿಂಗೆ ದಾರಿಯನು । ಆರು ತೋರಿದಡೇನು ।
ಸಾರಯದ ನಿಜವಾ ತೋರುವ, ಗುರುವು ತಾ ।
ನರಾದಡೇನು ಸರ್ವಜ್ಞ ।।
ಸರ್ವಜ್ಞನ ತ್ರಿಪದಿಗಳು ಮತ್ತು ಅದರ ಅರ್ಥ
ಹಮ್ಮು ಎಂಬುವ ಕಿಚ್ಚು ಒಮ್ಮೆಲೇ
ನಂದುವುದೇ ?ನಂಬೊಮ್ಮ ಹರಿ ಬೆಂದು ಜಗಬೆಂದು
ದಾಕಿಚ್ಚ ಗುಮ್ಮಿಹನೆ ಯೋಗಿ ಸರ್ವಜ್ಞ.
ಮಾಳನೂ ಮಾಳಿಯೂ । ಕುಳ್ತಿ೦ದ ಹೆಮ್ಮೆಯಲಿ ।
ಕೇಳೇ ನಿನಾರ ಮಗನೆಂದು -ನಾ ಶಿವನ
ಮೇಳದನುಗೆಂಬೆ ಸರ್ವಜ್ಞ.
ಪುರುಷ ಕಬ್ಬಿನದೆಸೆವ ,ಕರಡಿಯೊಳಗಡಗಿಹುದೆ ?
ಹರಿಭಕ್ತಿ ಉಳ್ಳ ಮಹಿಮ , ಸಂಸಾರದೊಳು
ಚಿರಕಾಲವಿಹವೇ ? ಸರ್ವಜ್ಞ.
ಕೂಳು ಹೋಗುವ ತನಕ ಗುಳಿಯಂತಿರುತಿಕ್ಕು
ಕೂಳು ಹೋಗದಾ ಮೂಡಿ ಬರಲು
ಮನುಜನವ ಮುಳನಾಯಕ್ಕೂ ಸರ್ವಜ್ಞ.
ಜಾಳಿಗೆಯೂ ಕಟ್ಟುವುದು । ಕಾಳಗಕೆ ನಡೆವುದು
ಸೂಳೇರ ಸುಖವ ಮಾಡುವುದು
ಕೂಳಿನ ಗುಣವು ಸರ್ವಜ್ಞ.
ಮುನ್ನ ಪೂರ್ವದಲಾನು । ಪನ್ನಗಧರನಾಳು
ಎನ್ನಯ ಪೆಸರು ಪುಷ್ಪದತ್ತನು -ಎಂದು
ಮನ್ನಿಪರು ನೋಡ ಸರ್ವಜ್ಞ.
ನಿದ್ರೆಯಿಂ ಸುಖವಿಲ್ಲ ಪದ್ಯದಿಂ ಅರಿವಿಲ್ಲ
ಮುದ್ರೆಯಿಂದದಧಿಕ ಮಾತಿಲ್ಲ ದೈವವುಂ
ರುದ್ರನಿಂದಿಲ್ಲ ಸರ್ವಜ್ಞ.
ಇದ್ದಲ್ಲಿಂ ಕರಿದಿಲ್ಲ ಬುದ್ಧಿಯಿಂ ಹಿರಿದಿಲ್ಲ
ವಿದ್ಯೆಯಿಂದಧಿಕ ಧನವಿಲ್ಲ ದೈವ ತಾ
ರುದ್ರನಿಂದಿಲ್ಲ ಸರ್ವಜ್ಞ.
ಹರಿಬ್ರಹ್ಮರೆಂಬುವರು ಹರನಿಂದಲಾದವರು
ಅರಸನಿಗೆ ಆಳು ಸರಿಯಿಹನೇ ಪಶುಪತಿಗೆ
ಸರಿಯರು ಕಾಣೆ ಸರ್ವಜ್ಞ.
ಬಿಂದುವ ಬಿಟ್ಟು ಹೊ । ದಂದು ಬಸುರಾದವಳ
ಲಂದಡಿಯಷ್ಟಾದಶ ಮಾಸ – ಉದರದಲ್ಲಿ
ನಿಂದು ನ ಬೆಳೆದೆ ಸರ್ವಜ್ಞ.
ನಾವು ಸಾಕಷ್ಟು ಸರ್ವಜ್ಞನ ತ್ರಿಪದಿಗಳನ್ನು ಇಲ್ಲಿ ನಮೂದಿಸಿದ್ದೇವೆ. ಅಕಸ್ಮಾತ್ ಯಾವುದಾದರೂ ಪ್ರಸಿದ್ಧ ಪದ್ಯವನ್ನ ನಮೂದಿಸದೆ ಹೋಗಿದ್ದರೆ ಖಂಡಿತ ಕಮೆಂಟ್ ನಲ್ಲಿ ತಿಳಿಸಿ. ಮಕ್ಕಳಿಗೆ ಸರ್ವಜ್ಞನ ಕವಿತೆಗಳು ಯಾವುವು ಎಂಬುದೇ ತಿಳಿದಿರುವುದಿಲ್ಲ ಇದಕ್ಕೆ ಮುಖ್ಯ ಕಾರಣ ಶಾಲಾ-ಕಾಲೇಜುಗಳಲ್ಲಿ ಪುಸ್ತಕದ ಸಿಲಬಸ್ ಇಲ್ಲದೆ ಇರುವ ಕಾರಣ ಶಾಲಾ-ಕಾಲೇಜುಗಳನ್ನು ಸಹ sarvajnana vachanagalu ಬಗ್ಗೆ ತಿಳಿಸುವುದಿಲ್ಲ ಹೀಗಾಗಿಯೇ ಮಾಹಿತಿ ಕೊರತೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕಾಣುತ್ತಿದೆ ಈ ಕಾರಣಕ್ಕಾಗಿ ನಮ್ಮ ಪರಂಪರೆ ಹಾಗೂ ಇತಿಹಾಸವನ್ನು ಉಳಿಸುವ ಉದ್ದೇಶದಿಂದ ಹಲವು ಕವಿರತ್ನಗಳು ರಚಿಸಿರುವ ಕಾವ್ಯಗಳು ಇತ್ತೀಚಿನ ಮಕ್ಕಳು ಓದುತ್ತಿಲ್ಲ ಹಾಗಾಗಿ ನಮ್ಮ ಪರಂಪರೆಯ ಬಗ್ಗೆ ಹೆಚ್ಚಿನ ಮಾಹಿತಿ ಮಕ್ಕಳಲ್ಲಿ ಕಂಡು ಬರುತ್ತಿಲ್ಲ ಈ ಕಾರಣಕ್ಕಾಗಿ ನಾವು ನಿಮಗೆ ತಿಳಿಯ ಬಯಸುವುದೇನೆಂದರೆ ಆದಷ್ಟು ಮಕ್ಕಳಿಗೆ ಮನೆಯಲ್ಲಿರುವಾಗ ನಮ್ಮ ಕವಿಗಳು ಬರೆದಿರುವ ಪುಸ್ತಕಗಳನ್ನ ಓದಲು ತಿಳಿಸಿ.
ಕೊಟ್ಟು ಹುಟ್ಟಲಿಲ್ಲ ,ಮುಟ್ಟಿ ಪೂಜಿಸಲಿಲ್ಲ
ಸಿಟ್ಟಿನಲ್ಲಿ ಶಿವನ ಬೈದರೆ , ಶಿವ ತಾನು ರೊಟ್ಟಿ ,
ಕೊಡುವೆನೆ ಸರ್ವಜ್ಞ.
ಇಂದುವಿನೊಲುರಿಯುಂಟೆ ? ಸಿಂಧುವಿನೊಳಾರಬಂಟೆ ?
ಸುಂದ ವೀರನೊಳು ಭಯ ಉಂಟೇ ? ಭಕ್ತಿಗೆ
ಸಂದೇಹ ಉಂಟೆ ? ಸರ್ವಜ್ಞ.
ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ?
ಜಾತಿ ವಿಜಾತಿ ಎನಬೇಡ ದೇವನೊಲಿ
ದಾತದೆ ಜಾತಾ. ಸರ್ವಜ್ಞ.
ಕೋತಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ
ಮೇಲು ಮೇಟಿಯಿಂದ ರಾಟಿ ನಡೆದುದಲ್ಲದೆ
ದೇಶ ದಾಟವೇ ಕೆಡಗು ಸರ್ವಜ್ಞ.
ಎಂಜಲವು ಶಾಚವು ,ಸಂಜೆ ಎಂದೆನಬೇಡ
ಕುಂಜರವು ವನವನೆನೆವಂತೆ ಬಿಡದೇನಿ
ರಂಜನನ ನೆನೆಯೂ -ಸರ್ವಜ್ಞ.
ಕಲ್ಲುಕಲ್ಲೆಂಬುವಿರಿ, ಕಲ್ಲೋಳಿಪ್ಪುವುದೇ ದೈವ ?
ಕಲ್ಲಲ್ಲಿ ಕಳೆಯ ನಿಲಿಸಿದ ,ಗುರುವಿನ
ಸೊಲ್ಲಲ್ಲೇ ದೈವ , ಸರ್ವಜ್ಞ.
ಜ್ಞಾನ ಉಳ್ಳವನೋಡಾಲು ಭಾನುವಿನಂತಿಹುದು
ಜ್ಞಾನವಿಲ್ಲದವನ ಬರಿಯೊಡಲು ಹಾಳೂರ
ಶುನಕನಂತಕ್ಕೂ ಸರ್ವಜ್ಞ.
ಕಂಡವರ ದಂಡಿಸುತ ,ಕೊಂದವರ ವಡವೆಗಳ
ನುಂಡುಂಡು ಮಲಗಿ ಮಡಿದ ಮೇಲುವೆಗೆ
ಯಮದಂಡ ತಪ್ಪುವದೇ ಸರ್ವಜ್ಞ.
ಏನಾದಡೇನಯ್ಯಾ ತಾನಾಗದನ್ನಕ್ಕೂ
ತಾನಾಗಿ ತನ್ನನಿರಿದೊಡೆ ಲೋಕ ತಾ
ನೇನಾದೊಡೇನು ಸರ್ವಜ್ಞ.
ಅರಿಯನೆಂಬುವಗೊಂದು ಕುರುಹುಂಟು ಬೊಮ್ಮನ
ನರಿದೆ ನೆಂಬುವಗೊಂದು ಅರಿವ ತಾನರಿದೊಡೆ
ತೆರೆಹಿಲ್ಲ ಬೊಮ್ಮ ಸರ್ವಜ್ಞ.
ಮನದಲ್ಲಿ ನೆನೆವಂಗೆ ಮನೆಯೇನು ? ಮಠವೇನೂ ?
ಮನದಲ್ಲಿ ನೆನೆಯದಿರುವವನು ದೇಗುಲದ ಕೊನೆಯಲ್ಲಿದ್ದೆನು
ಸರ್ವಜ್ಞ.
ಇಂಜಿನೊಳು ನಾಟವನು, ತೆಂಗಿನೊಳಗಳನೀರು
ಭೃಂಗ ಕೋಗಿಲೆಯ ಕಂಠದೊಳು ,ಗಾಯನವ
ತುಂಬಿದವರಾರು ಸರ್ವಜ್ಞ.
ಎಲ್ಲ ಬಲ್ಲವರಿಲ್ಲ ,ಬಲ್ಲವರು ಬಹಳಿಲ್ಲ
ಬಲವಿಲ್ಲ ಬಲ್ಲವರಿದ್ದು
ಸಾಹಿತ್ಯ ಎಲ್ಲರಿಗಲ್ಲ ಸರ್ವಜ್ಞ.
ಸರ್ವಜ್ಞ ರಚಿಸಿರುವ ಕಾವ್ಯಗಳು ಕೇವಲ ಮೂರು ಸಾಲು ಹೊಂದಿರಬಹುದು ಆದರೆ ಅದರಲ್ಲಿರುವ ಅರ್ಥ ಬಹುದೊಡ್ಡದಾಗಿದೆ. ಬೇಸಿಗೆ ಸಮಯದಲ್ಲಿ ನಿಮ್ಮ ಮಕ್ಕಳಿಗೆ ಇಂತಹ ಹಲವು ನಮ್ಮ ಕವಿಗಳು ರಚಿಸಿರುವ ಪುಸ್ತಕವನ್ನು ಓದಲು ನೀಡಿ ಹಾಗೂ ಅವರಿಗೆ ಹೇಗೆ ಓದಿ ಅರ್ಥ ಮಾಡಿಕೊಳ್ಳಬೇಕು ಎಂಬುದನ್ನು ಸಹ ತಿಳಿಸಿ ಇದರಿಂದ ಹಲವು ಮಾಹಿತಿಗಳು ನಿಮ್ಮ ಮಕ್ಕಳು ಓದುವಂತಾಗುತ್ತದೆ ಜೊತೆಗೆ ಕಷ್ಟದ ಸಮಯದಲ್ಲಿ ಖಂಡಿತ ನೆರವಿಗೆ ಬರಲಿದೆ ಮಕ್ಕಳ ಬುದ್ಧಿ ವಿಕಾಸದಲ್ಲೂ ಸಹ ಇಂತಹ ಪುಸ್ತಕಗಳು ಗಣನೀಯ ಮಹತ್ವ ವಹಿಸುತ್ತವೆ ಹಾಗಾಗಿ ಸರ್ವಜ್ಞನ ತ್ರಿಪದಿಗಳನ್ನ ಓದಲು ಪುಸ್ತಕಗಳನ್ನ ಖರೀದಿ ಮಾಡಿ ಮನೆಯಲ್ಲಿ ಖಂಡಿತ ಒಂದು ದಿನ ಮನೆಯವರೆಲ್ಲ ಓದಿ ತಿಳಿದುಕೊಳ್ಳುತ್ತಾರೆ.
ಸರ್ವಜ್ಞ ವಚನಗಳು pdf
ಏಳು ಕೋಟಿಯೇ ಕೋಟಿ , ಏಳು ಲಕ್ಷವೇ ಲಕ್ಷ
ಏಳು ಸಾವಿರ ಎಪ್ಪತ್ತು ವಚನಗಳ
ಹೇಳಿದನು ಕೆಳ ಸರ್ವಜ್ಞ.
ಸತ್ಯವೆಂಬುದು ತಾನು| ಹಿತ್ತಲದ ಗಿಡ ನೋಡ
ಮತ್ತೆಲ್ಲಿ ನೋಡಿ ಅರಸದಲೇ ತಾನಿರ್ದ
ಹತ್ತಿಲೆ ನೋಡ ಸರ್ವಜ್ಞ.
ತಂದೆ ಹಾರುವನಲ್ಲ । ತಾಯಿ ಮಾಳಿಯೂ ಅಲ್ಲ ।
ಚಂದ್ರಶೇಖರನ ವರದಿಂದ ಪುಟ್ಟಿದ
ಕಂದ ತಾನೆಂದು ಸರ್ವಜ್ಞ.
ಬಂಧುಗಳು ಆದವರು , ಬ೦ದುಂಡು ಹೋಗುವರು
ಬಂಧವನ ಕಳೆಯಲರಿಯರು , ಗುರುವಿಂದ
ಬಂಧುಗಳು ಉಂಟೆ ? ಸರ್ವಜ್ಞ.
ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು
ಗೋರ್ಕಲ್ಲಮೇಲೆ ಮಳೆಗರೆದರೆ
ಆಕಲ್ಲು ನೀರುಕುಡಿವುದೆ ಸರ್ವಜ್ಞ.
ಪುರುಷಲೋಹವ ಸೋಂಕಿ , ವರುಷವಿರಬಲ್ಲುದೆ ?
ಪುರುಷವೆಂತಂತೆ ಶಿಷ್ಯಂಗೆ ಗುರುವಿನ
ದರುಶನವೇ ಪುರುಷ ಸರ್ವಜ್ಞ.
ಮುದ್ದೆಗಳು ಇಲ್ಲದೆ । ನಿದ್ರೆಗಳು ಬಾರವು
ಮುದ್ದು ಮಾತುಗಳು ಸೊಗಸವು -ಒಡಲಿಗೆ
ಮುದ್ದೆ ತಪ್ಪಿದರೆ ಸರ್ವಜ್ಞ.